1. ಕಾಲುಬಾಯಿ ಜ್ವರ :
- ವೈರಾಣುವಿನಿಂದ ಬರುವ ಸಾಂಕ್ರಾಮಿಕ ಕಾಯಿಲೆ. ಆದ್ದರಿಂದ ಚಿಕಿತ್ಸೆಗಿಂತ ಲಸಿಕೆಯನ್ನು ವರ್ಷಕ್ಕೆ ಒಂದು ಬಾರಿ ಹಾಕಿಸಬೇಕು.
- ನೀರು, ಗಾಳಿ, ಆಹಾರ ಹಾಗೂ ಮನುಷ್ಯರ ಮುಖಾಂತರ ರೋಗ ಹರಡುವುದು.
- ಕಾಯಿಲೆ ಬಂದ ರಾಸುವಿನ ಬಾಯಲ್ಲಿ ಹುಣ್ಣು, ಕಾಲಿನ ಗೊರಸಿನಲ್ಲಿ ಗಾಯವಾಗುತ್ತದೆ.
- ಹೆಚ್ಚಿಗೆ ಜ್ವರವಿರುತ್ತದೆ ಹಾಗೂ ಜೊಲ್ಲು ಸುರಿಸುತ್ತಿರುತ್ತದೆ (1060 ಸೆ ನಿಂದ 1070 ಸೆ)
- ಕಾಲಿನಲ್ಲಿ 2 ಗೊರಸಲು ಇರುವ ಪ್ರಾಣಿಗಳಲ್ಲಿ ಮಾತ್ರ ಕಂಡುಬರುತ್ತದೆ. (ಎಮ್ಮೆ, ಕುರಿ, ಮೇಕೆ, ಜಿಂಕೆ, ಹಸು ಇತ್ಯಾದಿ).
- ಕಾಯಿಲೆ ಬಂದು ಗುಣಮುಖವಾದ ರಾಸುಗಳು ಬೆದೆಗೆ ಬರುವುದು ನಿಧಾನ, ಸರಿಯಾಗಿ ಮೇವು ತಿನ್ನುವುದಿಲ್ಲ.
- ಹಾಲು ಕಡಿಮೆ ಕರೆಯುತ್ತವೆ. ಫಲ ಕಟ್ಟುವುದು ತಡವಾಗುತ್ತದೆ, ಯಾವಾಗಲೂ ತೇಕುತ್ತಿರುತ್ತದೆ ಮತ್ತು ಕೂದಲು ಉದ್ದವಾಗಿ ಒರಟಾಗಿರುತ್ತದೆ.
- ಕಾಯಿಲೆ ಬಂದ ರಾಸುಗಳ ಬಾಯಿಯನ್ನು ಪೊಟಾಸಿಯಂ ಪರ್ಮಾಂಗನೇಟ್, ಅಡಿಗೆ ಸೋಡಾದ ನೀರಿನಿಂದ. ಹಾಗೂ ಕಾಲನ್ನು ವಾಷಿಂಗ್ ಸೋಡಾ ನೀರಿನಿಂದ ದಿನಕ್ಕೆ 3-4 ಬಾರಿ ತೊಳೆಯಬೇಕು ಮತ್ತು ಕೊಟ್ಟಿಗೆಗೆ ವಾಷಿಂಗ್ ಸೋಡ ನೀರಿನಿಂದ ಸಿಂಪಡಿಸಬೇಕು.
- ಕಾಲಿನ ಗಾಯಕ್ಕೆ ಹುಳ ಬೀಳದಿರಲು ಬೇವಿನ ಎಣ್ಣೆ ಹಚ್ಚುವುದು ಸೂಕ್ತ.
2. ಗಳಲೆ ರೋಗ:
- ಬ್ಯಾಕ್ಟೀರಿಯಾದಿಂದ ಬರುವ ಸಾಂಕ್ರಾಮಿಕ ಕಾಯಿಲೆ.
- ಜ್ವರ ಹೆಚ್ಚಾಗಿರುತ್ತದೆ, ಗಂಟಲು ಊದಿರುತ್ತದೆ, ಉಸಿರಾಡಲು ಕಷ್ಟವಾಗುತ್ತದೆ.
- ಉಸಿರಾಡುವಾಗ “ಗೊರ ಗೊರ” ಶಬ್ದವಾಗುತ್ತದೆ.
- ತಕ್ಷಣ ಸಾಯುವುದು ಹೆಚ್ಚು.
- ಈ ಕಾಯಿಲೆ ಎಮ್ಮೆಗಳಿಗೆ ಬರುವುದು ಹೆಚ್ಚು.
- ರೋಗ ಲಕ್ಷಣ ಕಂಡ ತಕ್ಷಣ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಬೇಕು.
3. ಚಪ್ಪೆ ರೋಗ :
- ಬ್ಯಾಕ್ಟೀರಿಯಾಗಳಿಂದ ಬರುವ ಸಾಂಕ್ರಾಮಿಕ ಕಾಯಿಲೆ, ನಾಟಿ ರಾಸುಗಳಲ್ಲಿ ಹೆಚ್ಚು.
- ಎಳೆಯ ಕರುಗಳಿಗೆ, ಪಡ್ಡೆಗಳಿಗೆ ಬರುವುದು ಹೆಚ್ಚು.
- ಮಾಂಸ ಖಂಡ ಹೆಚ್ಚಿಗೆ ಇರುವ ಕಡೆ (ಚಪ್ಪೆ-ತೊಡೆಯ ಭಾಗ) ರೋಗವು ಕಾಣಿಸಿಕೊಳ್ಳುತ್ತದೆ.
- ರೋಗಾಣುಗಳು ಬೆಳೆದು ಮಾಂಸವನ್ನು ಕೊಳೆಸಿ ಗಾಳಿ ತುಂಬಿಕೊಂಡು ಆ ಭಾಗವು ಊದಿಕೊಳ್ಳುತ್ತದೆ.
- ಈ ಕಾಯಿಲೆ ಬರದಂತೆ ತೊಡೆಯ ಭಾಗಕ್ಕೆ ಕರುಗಳಿಗೆ ಕಬ್ಬಿಣದ ಬರೆ ಹಾಕುವುದು ಹಳ್ಳಿಗರ ವಾಡಿಕೆ. ಈ ರೀತಿ ಮಾಡಬಾರದು.
- ರಾಸುಗಳಲ್ಲಿ ಜ್ವರವಿರುತ್ತದೆ. ಕಾಲು ಕುಂಟುತ್ತದೆ, ಈ ಕಾಯಿಲೆ ಬರದಂತೆ ಪ್ರತಿ ವರ್ಷ ಏಪ್ರಿಲ್ ಮಾಹೆಯಲ್ಲಿ ಲಸಿಕೆ ಹಾಕಿಸಬೇಕು.
- ಕಾಯಿಲೆ ಬಂದ ಹಸುವಿಗೆ ಪಶುವೈದ್ಯರಿಂದ ಕಾಲಕಾಲಕ್ಕೆ ಚಿಕಿತ್ಸೆ ಕೊಡಿಸಬೇಕು.
4. ನೆರಡಿ ರೋಗ :
- ಬೆಸಿಲ್ಲಿಸ್ ಆಂತ್ರಾಸಿಸ್ ಎಂಬ ಸೂಕ್ಷ್ಮ ಜೀವಿಯಿಂದ ಈ ಸಾಂಕ್ರಾಮಿಕ ರೋಗವು ಬರುತ್ತದೆ.
- ಸೂಕ್ಷ್ಮ ಜೀವಿಗಳಿರುವ ಕಲುಷಿತ ನೀರು/ ಮೇವು ಸೇವಿಸುವುದರಿಂದ ಈ ರೋಗವು ಬರುತ್ತದೆ.
- ಜ್ವರ 1060 ಸೆ -1070 ಸೆ ಇದ್ದು, ಕೆಲವೊಮ್ಮೆ ಇದ್ದಕ್ಕಿದ್ದ ಹಾಗೆ ದನಗಳು ಸಾಯುತ್ತವೆ.
- ಮೇವು ಬಿಡುವುದು, ಹೆಚ್ಚು ನಾಡಿ ಬಡಿತ, ಉಸಿರಾಟ, ದೇಹದ ನಾನಾ ಭಾಗಗಳಲ್ಲಿ ಬಾವು ಬರುತ್ತದೆ.
- ಪ್ರತಿ ವರ್ಷ ಜುಲೈ / ಆಗಸ್ಟ್ ತಿಂಗಳಿನಲ್ಲಿ ಈ ರೋಗದ ಲಸಿಕೆಯನ್ನು ಕೊಡಿಸಿ ತಡೆಗಟ್ಟಬಹುದು.
- ಈ ರೋಗ ತಗುಲಿದ ರಾಸುಗಳನ್ನು ಕೊಯ್ಯಬಾರದು. ಭೂಮಿಯಲ್ಲಿ ಹೂಳಬೇಕು.
5. ಥೈಲೇರಿಯಾಸಿಸ್ (ಉಣ್ಣೆ ಜ್ವರ) :
- ಹೆಚ್ಚಾಗಿ ಮಿಶ್ರ ತಳಿ ರಾಸುಗಳಲ್ಲಿ ಕಂಡುಬರುತ್ತದೆ.
- ಉಣ್ಣೆಗಳಿಂದ ಈ ಕಾಯಿಲೆ ರಾಸಿನಿಂದ ರಾಸಿಗೆ ಹರಡುತ್ತದೆ.
- ಅತಿ ಹೆಚ್ಚು ಜ್ವರ (1070 ಸೆ - 1060 ಸೆ) ಹಾಗೂ ಮೇವು ತಿನ್ನದೇ ಇರುವುದರಿಂದ ಸಣ್ಣಾಗುವುದು.
- ತೊಡೆಯ ಸಂದಿಯ ಗಂಟುಗಳು ಊದಿಕೊಂಡಿರುತ್ತವೆ.
- ಕೆಮ್ಮು ಇರುವುದು, ಕಣ್ಣೀರು ಸುರಿಯುತ್ತದೆ ಮತ್ತ ಕಣ್ಣು ಕೆಂಪಾಗಿರುತ್ತದೆ.
- ಉಣ್ಣೆಯ ಹತೋಟಿ ಹಾಗೂ ಜೀವಿತಾವಧಿಯಲ್ಲಿ ಒಮ್ಮೆ ಲಸಿಕೆ ಹಾಕುವುದರಿಂದ ಈ ಕಾಯಿಲೆ ನಿಯಂತ್ರಿಸಬಹುದು.
6. ಕೆಚ್ಚಲು ಬಾವು :
- ಹೆಚ್ಚು ಹಾಲು ಕೊಡುವ ಮಿಶ್ರತಳಿ ರಾಸುಗಳಿಗೆ ಬರುವುದು ಸಾಮಾನ್ಯ.
- ನಿರ್ದಿಷ್ಟ ರೋಗಾಣುವಿನಿಂದ ಬರದೇ, ವಿವಿಧ ರೋಗಾಣುಗಳಿಂದ ಈ ಕಾಯಿಲೆ ಬರುತ್ತದೆ.
- ಕೆಚ್ಚಲು ಊತ, ಕೆಂಪಾಗುವುದು, ಕೆಟ್ಟ ಹಾಲು ನೀರಿನಂತೆ ಕೆಚ್ಚಲಿನಿಂದ ಬರುವುದು.
- ಚಿಕಿತ್ಸೆ ನೀಡದಿದ್ದಲ್ಲಿ ಕೆಚ್ಚಲು ಸಂಪೂರ್ಣ ಹಾಳಾಗಿ ಜೀವಿತಾವಧಿಯಲ್ಲಿ ಪೂರ್ಣ ಹಾಲು ಉತ್ಪಾದನೆ ನಿಲ್ಲಬಹುದು.
- ತಕ್ಷಣ ಪಶು ವೈದ್ಯರಿಂದ ಚಿಕಿತ್ಸೆ ನೀಡುವುದು ಸೂಕ್ತ.
- ಕೆಚ್ಚಲು ಬಾವು ಬಂದು ಚಿಕಿತ್ಸೆ ನೀಡಿದ ಕೆಚ್ಚಲಿನಲ್ಲಿ ಹಾಲು ಕಡಿಮೆಯಾಗುತ್ತದೆ.
- ಈ ಕಾಯಿಲೆ ನಿಯಂತ್ರಿಸಲು ಲಸಿಕೆ ಇಲ್ಲ.
- ಈ ಕಾಯಿಲೆ ನಿಯಂತ್ರಿಸಲು, ಕೆಚ್ಚಲು, ಕೊಟ್ಟಿಗೆ, ಹಾಲು ಕರೆಯುವ ಕೈಗಳ ಸ್ವಚ್ಛತೆ ಹಾಗೂ ಪರಿಸರ ನೈರ್ಮಲ್ಯ ಅತಿ ಮುಖ್ಯ.
7. ಮಿಲ್ಕ್ ಫೀವರ್ : (ಹಾಲು ಜ್ವರ) :
- ಅತಿ ಹೆಚ್ಚು ಹಾಲು ಕೊಡುವ ಮಿಶ್ರತಳಿ ರಾಸುಗಳಲ್ಲಿ ಕರು ಹಾಕಿದ 3 ದಿನಗಳ ಒಳಗೆ ಕಾಣಿಸುತ್ತದೆ.
- ರಕ್ತದಲ್ಲಿ ಗಣನೀಯವಾಗಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗುವುದರಿಂದ ಬರುತ್ತದೆ.
- ಕಾಯಿಲೆ ಬಂದ ರಾಸು ಮೇಲೆ ಏಳುವುದಿಲ್ಲ ಹಾಗೂ ಕುತ್ತಿಗೆ ಪಕ್ಕಕ್ಕೆ ವಾಲುತ್ತದೆ. ತಲೆ ಮತ್ತು ಕಾಲುಗಳ ಮಾಂಸ ಖಂಡಗಳ ಅನೈಚ್ಛಿಕ ಚಲನೆ.
- ರಾಸಿನ ಮೈಬಿಸಿ ಕಡಿಮೆಯಾಗುತ್ತದೆ. ಕಣ್ಣಿನ ಪಾಪೆ ಅಗಲವಾಗಿದ್ದು ಒಣಗಿದಂತೆ ಕಾಣುತ್ತದೆ.
- 12-24 ಘಂಟೆಯೊಳಗೆ ಚಿಕಿತ್ಸೆ ನೀಡದಿದಲ್ಲಿ ಸಾವು ಸಂಭವಿಸಬಹುದು.
- ಕ್ಯಾಲ್ಸಿಯಂ ಇಂಜೆಕ್ಷನ್ಗಳನ್ನು ನೀಡುವುದರಿಂದ ಸಂಪೂರ್ಣವಾಗಿ ಗುಣಪಡಿಸಬಹುದು.
8. ಬೆಬಿಸಿಯೋಸಿಸ್ :
- ಇದು ಉಣ್ಣೆಗಳಿಂದ ಹರಡುವಂತಹ ಕಾಯಿಲೆ.
- ಅತಿಯಾದ ಜ್ವರ, ಕಾಫಿ ಬಣ್ಣದ ಮೂತ್ರ, ಈ ಕಾಯಿಲೆಯ ಲಕ್ಷಣಗಳು
- ತಕ್ಷಣ ಚಿಕಿತ್ಸೆ ಕೊಡಿಸಿದರೆ ಗುಣಪಡಿಸಲು ಸಾಧ್ಯ.
- ಚಿಕಿತ್ಸೆ ನೀಡದಿದ್ದಲ್ಲಿ ಸಾವು ಸಂಭವಿಸಬಹುದು.
- ಉಣ್ಣೆಗಳ ನಿಯಂತ್ರಣದಿಂದ ಈ ಕಾಯಿಲೆ ತಡೆಗಟ್ಟಬಹುದು.
9. ಅವ್ಯಕ್ತ ಕೆಚ್ಚಲುಬೇನೆ :
ಅವ್ಯಕ್ತ ಕೆಚ್ಚಲುಬೇನೆಯಲ್ಲಿ ಕೆಚ್ಚಲಿನ ಬಾವು, ಕೆಂಪಗಾಗುವಿಕೆ, ನೋವು, ಜ್ವರ, ಕೆಟ್ಟ ಹಾಲು ಮುಂತಾದ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.
ಆದರೆ ರಾಸು ಈ ಬೇನೆಯಿಂದ ಬಳಲುತ್ತಿರುತ್ತದೆ. ಹಾಲಿನ ಇಳುವರಿಯು ಸ್ವಲ್ಪ ಕಡಿಮೆಯಾಗಿರುತ್ತದೆ.
ಈ ಬೇನೆಯಿಂದ ಆಗುವ ಪ್ರಮುಖ ಸಂಕಷ್ಟಗಳು ಈ ಕೆಳಗಿನಂತಿವೆ.
- ಸಾಧಾರಣವಾಗಿ, ಗಮನಕ್ಕೆ ಬಾರದಷ್ಟು ಕಡಿಮೆ ಪ್ರಮಾಣದಲ್ಲಿ ಹಾಲಿನ ಇಳುವರಿ ಕುಂಠಿತಗೊಂಡಿರುತ್ತದೆ. ಒಂದು ಕರಾವಿನ ಲೆಕ್ಕ ಹಿಡಿದರೆ ಇದು ದೊಡ್ಡ ನಷ್ಟ.
- ಕಡಿಮೆ ಇಳುವರಿಯಿಂದ ಕಡಿಮೆ ಆದಾಯ, ಕಡಿತಗೊಂಡ ಲಾಭ.
- ಸಾಮಾನ್ಯವಾಗಿ ಗಮನಕ್ಕೆ ಬಾರದ ಈ ಬೇನೆಯು ಇತರೆ ರಾಸುಗಳಿಗೂ ಹರಡಬಹುದು, ಇದರಿಂದ ಹೆಚ್ಚಿದ ನಷ್ಟ.
- ಪೂರ್ಣಪ್ರಮಾಣದ ಕೆಚ್ಚಲುಬೇನೆಯಾಗಿ ಪರಿವರ್ತಿತಗೊಳ್ಳಬಹುದು.
ಲಕ್ಷಣಗಳಿರದ ಈ ಬೇನೆಯನ್ನು ಗುರುತಿಸುವುದು ತುಂಬಾ ಕಷ್ಟವಾದರೂ, ರಾಸಾಯನಿಕ ಪರೀಕ್ಷೆಗಳ ಮುಖಾಂತರ ಪತ್ತೆ ಹಚ್ಚಬಹುದು.
ನಂತರ ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಿ ಉತ್ಪಾದನೆ ಮತ್ತು ಲಾಭ ಹೆಚ್ಚಿಸಿಕೊಳ್ಳಬಹುದು.
10. ಚರ್ಮಗಂಟು ರೋಗ ಅಥವಾ ಚರ್ಮ ಮುದ್ದೆರೋಗ
ಚರ್ಮಗಂಟು ರೋಗ ಅಥವಾ ಚರ್ಮ ಮುದ್ದೆರೋಗ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಕ್ಯಾಪ್ರಿಫಾಕ್ಸ್ (ಫಾಕ್ಸ್ ವಿರೀಡೆ) ಎಂಬ ವೈರಾಣುವಿನಿಂದ ಬರುತ್ತದೆ.
ದನ, ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ, ಕರುಗಳಲ್ಲಿ ಅತಿ ಹೆಚ್ಚಾಗಿ ಹಾಗೂ ತೀಕ್ಷö್ಮವಾಗಿ ಕಾಣಿಸಿಕೊಳ್ಳುತ್ತದೆ.
ಈ ರೋಗವು ಮುಖ್ಯವಾಗಿ ದನಗಳಲ್ಲಿ ಕಚ್ಚುವ ಕೀಟಗಳಿಂದ (ಸೊಳ್ಳೆ, ನೊಣ, ಉಣ್ಣೆ ಇತ್ಯಾದಿ) ಬಹುಬೇಗ ಹರಡುತ್ತದೆ.
ಮಳೆಗಾಲದಲ್ಲಿ ಮತ್ತು ನಂತರದ ದಿನಗಳಲ್ಲಿ ಹೆಚ್ಚಾಗಿ ಈ ರೋಗವು ಪಸರಿಸುತ್ತದೆ.
ರೋಗದ ಲಕ್ಷಣಗಳು:
ರೋಗದ ಹಂತಗಳಿಗೆ ಅನುಗುಣವಾಗಿ ಜಾನುವಾರುಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
- ಅತೀಯಾದ ಜ್ವರ (105-1080ಸೆ)
- ಕಣ್ಣುಗಳಿಂದ ನೀರು ಸೋರುವುದು
- ನಿಶ್ಯಕ್ತಿ, ಕಾಲುಗಳಲ್ಲಿ ಬಾವು ಹಾಗೂ ಕುಂಟುವುದು
-
ಜಾನುವಾರುಗಳ ಚರ್ಮದ ಮೇಲೆ 2-4 ಸೆ.ಮೀ. ನಷ್ಟು ಅಗಲವಿರುವ ಗುಳ್ಳೆ ಕಾಣಿಸಿಕೊಂಡು ನಂತರ ಒಡೆದು ಗಾಯವಾಗಿ ನೋವುಂಟಾಗುತ್ತದೆ,
ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ನೊಣಗಳಿಂದ ಹುಳುಗಳು ಬಿದ್ದು ಹುಣ್ಣಾಗುತ್ತದೆ.
- ಹಾಲಿನ ಇಳುವರಿ ಕಡಿಮೆಯಾಗುವುದು ಮತ್ತು ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ.
-
ಎತ್ತುಗಳು ಹೆಚ್ಚು ಬಳಲುವುದರಿಂದ ಕೆಲಸದ ಸಾಮರ್ಥ್ಯ ಕುಂಠಿತವಾಗುತ್ತದೆ.
ಕರುಗಳು ತೀವ್ರವಾಗಿ ಬಳಲಿ ಸಾವಿಗೀಡಾಗಬಹುದು.
- ಮಿಶ್ರ ತಳಿಗಳಾದ ಜರ್ಸಿ, ಹೆಚ್.ಎಫ್. ರಾಸುಗಳು ಹಾಗೂ ಕರುಗಳು ಈ ರೋಗದಿಂದ ಹೆಚ್ಚು ಬಳಲುತ್ತವೆ.
ರೋಗ ಹರಡುವಿಕೆ :
- ಸೊಳ್ಳೆ, ಉಣ್ಣೆ, ನೊಣ ಹಾಗೂ ವಿವಿಧ ಕಚ್ಚುವ ಕೀಟಗಳಿಂದ
- ಕಲುಷಿತಗೊಂಡ ನೀರು ಹಾಗೂ ಆಹಾರದಿಂದ
- ಸೊಂಕಿತ ಜಾನುವಾರುಗಳ ನೇರ ಸಂಪರ್ಕದಿAದ
-
ರೋಗ ಹರಡುವಿಕೆ ಪ್ರಮಾಣ ಶೇ. 10-20 ರ, ಹಾಗೂ ರೋಗದ ಸಾವಿನ ಪ್ರಮಾಣ ಶೇ. 1-4 ರಷ್ಟು ಇರುತ್ತದೆ.
- ನೀರಿನ ಮೂಲಗಳ ಸುತ್ತಲೂ ಹೆಚ್ಚಾಗಿ ಕಂಡುಬರುತ್ತದೆ.
ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ :
-
ಈ ರೋಗವು ವೈರಣು ರೋಗವಾಗಿರುವುದರಿಂದ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ.
ಆದ್ದರಿಂದ ಜಾನುವಾರಗಳಿಗೆ ರೋಗದ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ನೀಡಬೇಕಾಗುತ್ತದೆ.
-
ಗೋಟ್ ಪಾಕ್ಸ್ (ಆಡಿನ ಪಾಕ್ಸ್) ಲಸಿಕೆ ಹಾಕಿಸುವುದರಿಂದ ಚರ್ಮಗಂಟು ರೋಗಕ್ಕೆ ರಕ್ಷಣೆ ದೊರಕುತ್ತದೆ
(ಕ್ರಾಸ್ ಪ್ರೋಟೆಕ್ಷ್ಷನ್ )
- ದೇಹವನ್ನು ತಂಪಾಗಿಸಲು ಮೈಮೇಲೆ ಹಸಿ ಬಟ್ಟೆ ಹಾಕುವುದು ಹಾಗೂ ತಂಪಾದ ಜಾಗದಲ್ಲಿ ಕಟ್ಟುವುದು ಅವಶ್ಯಕ.
- ದೇಹದಲ್ಲಿ ನಿರ್ಜಲಿಕರಣವಾಗದಂತೆ ಎಚ್ಚರ ವಹಿಸಬೇಕು.
-
ಚರ್ಮದ ಮೇಲಿನ ಗಾಯಗಳಿಗೆ ಪೋಟ್ಯಾಷಿಯಂ ಪರಮ್ಯಾಂಗನೇಟ್ ದ್ರಾವಣದಿಂದ ತೊಳೆದು
ಐಯೋಡಿನ್ ದ್ರಾವಣ, ಮುಲಾಮು ಹಾಗೂ ಬೇವಿನ ಎಣ್ಣೆ ಲೇಪಿಸಬೇಕು.
- ರೋಗ ಹರಡುವುದನ್ನು ತಡೆಯಲು ರೋಗಗ್ರಸ್ಥ ಜಾನುವಾರುಗಳನ್ನು ಬೇರ್ಪಡಿಸಬೇಕು.
- ರೋಗಗ್ರಸ್ಥ ಜಾನುವಾರುಗಳಿಗೆ ಉಪಯೋಗಿಸಿದ ಎಲ್ಲಾ ಸಾಮಗ್ರಿಗಳನ್ನು ಸ್ವಚ್ಚಗೊಳಿಸಬೇಕು.
- ಹಸಿರು ಮೇವು, ಪೌಷ್ಠಿಕ ಆಹಾರ ಹಾಗೂ ಲವಣ ಮಿಶ್ರಣ ನೀಡಬೇಕು.
-
ಕುಡಿಯುವ ನೀರಿನಲ್ಲಿ ಬೆಲ್ಲ, ಉಪ್ಪು ಹಾಗೂ ಅಡುಗೆ ಸೋಡಾ ಹಾಕಿ
ದಿನಕ್ಕೆ ೨-೩ ಬಾರಿ ಕುಡಿಸಬೇಕು.
- ಕೀಟಗಳ ಹಾವಳಿ ತಪ್ಪಿಸಲು ಹಸಿ ಬೇವಿನ ಸೊಪ್ಪಿನ ಹೊಗೆ ಹಾಕಬೇಕು.
-
ಈ ರೋಗವು ಸೊಳ್ಳೆ, ಉಣ್ಣೆ, ನೊಣ ಹಾಗೂ ಇತರೆ ಕೀಟಗಳಿಂದ ಮುಖ್ಯವಾಗಿ ಹರಡುವುದರಿಂದ
ಕೊಟ್ಟಿಗೆ ಸುತ್ತಮುತ್ತ ಸ್ವಚ್ಚತೆ ಕಾಪಾಡಬೇಕು ಹಾಗೂ
ಫಾರ್ಮಾಲಿನ್ (1%) ಫಿನೈಲ್ (2%) ಅಥವಾ ಸೋಡಿಯಂ ಹೈಪೋಕ್ಲೋರೇಟ್ (2%)
ದಿನಕ್ಕೆ ಎರಡು ಬಾರಿ ಸಿಂಪಡಿಸಬೇಕು.
- ರೋಗಗ್ರಸ್ಥ ಜಾನುವಾರು ಮರಣ ಹೊಂದಿದಲ್ಲಿ ಆಳವಾದ ಗುಂಡಿಯಲ್ಲಿ ಹೂಳಬೇಕು.
-
ರೋಗ ಹರಡುವ ಸಾಧ್ಯತೆ ಇರುವ ಜಾಗಗಳಾದ – ಜಾತ್ರೆ, ಜಾನುವಾರು ಸಂತೆ,
ಜಾನುವಾರು ಸ್ಪರ್ಧೆ, ಇಂತಹ ಜಾಗಗಳಿಗೆ ಜಾನುವಾರುಗಳನ್ನು ಬೀಡಬಾರದು.
ಸುಮಾರು 10 ಕಿ. ಮೀ. ಸುತ್ತಲೂ ಅಂತಹ ಯಾವ್ಯದೇ ಸ್ಥಳಗಳಿದ್ದರೆ ಎಚ್ಚರ ವಹಿಸಬೇಕು.
-
ರೋಗಗ್ರಸ್ಥ ಜಾನುವಾರುಗಳ ನಿರ್ವಹಣೆ ಮಾಡುವಾಗ
ಕೈಗಳಿಗೆ ಗ್ಲೌಸ್ ಮತ್ತು ಮುಖಕ್ಕೆ ಮಾಸ್ಕ್ ಬಳಸಬೇಕು.
ಪರಾವಲಂಬಿ ಜೀವಿಗಳು
ಪರೋಪ ಜೀವಿಗಳಲ್ಲಿ ಎರಡು ವಿಧ - ಹೊರ ಮತ್ತು ಒಳ ಪರಾವಲಂಬಿಜೀವಿಗಳು. ಟೊಕ್ಸೊಕ್ಯಾರಾ ವೈಟುಲೊರಮ್ ಎಂಬ ಒಳ ಪರಾವಲಂಬಿ ಜೀವಿ ಎಮ್ಮೆ ಕರುಗಳಲ್ಲಿ ಅಧಿಕವಾಗಿ ಕಂಡುಬರುವುದು. ಈ ಪರಾವಲಂಬಿಜೀವಿಯು ಕರುಗಳಲ್ಲಿ ಅಧಿಕ ಸಾವಿಗೆ ಕಾರಣವಾದದ್ದು. ಇದಲ್ಲದೇ ಹೊರ ಪರಾವಲಂಬಿಜೀವಿಗಳ ಕಾಟ ಕರುಗಳಿಗೆ ತಪ್ಪಿದ್ದಲ್ಲ. ಅದರಲ್ಲೂ ಹೇನು, ಪಿಸಿ, ಉಣ್ಣೆ ನೇರವಾಗಿ ಪ್ರಾಣಿಗಳಿಗೆ ಹಾನಿಯನ್ನು ಉಂಟುಮಾಡುತ್ತವೆ.
ಟೊಕ್ಸೊಕಾರಾ ವೈಟುಲೊರಮ್ ದುಂಡು ಹುಳುಗಳು
ಟೊಕ್ಸೊಕಾರಿಯೋಸಿಸ್ನಿಂದಾಗಿ ಕ್ಷೀಣಿಸಿದ ಕರು
ಹೆಮ್ಯಾಟೋಪಿನಸ್ ಟುಬರ್ಕುಲೆಟಸ್ ಹೇನು
ಹೇನು ಪೀಡಿತ ಎಮ್ಮೆ
ವಿವಿಧ ಬಗೆಯ ಪ್ರಾಣಿಜನ್ಯ ಸಾಂಕ್ರಾಮಿಕ ರೋಗಗಳು
ವೈರಸ್ ಅಥವಾ ವಿಷಾಣು ಜೀವಿಗಳಿಂದ ಹರಡುವ ರೋಗಗಳು
- ರೇಬೀಸ್ ಅಥವಾ ಹುಚ್ಚುನಾಯಿ ರೋಗ
- ಹಕ್ಕಿ ಜ್ವರ / ಬರ್ಡ್ ಪ್ಲೂ
- ಹಂದಿ ಜ್ವರ
- ಡೆಂಗ್ಯೂ ಜ್ವರ
- ಚಿಕನ್ ಗುನ್ಯಾ
- ಜಪಾನಿಸ್ ಎನ್ಸೆಪಲೈಟೀಸ್ (ಮೆದುಳು ಜ್ವರ)
- ವೆಸ್ಟ್ ನೈಲ್ ಜ್ವರ
- ಮಿಲ್ಕರ್ಸ್ ನಾಡ್ಯೂಲ್ಸ್ ಅಥವಾ ಪಾಕ್ಸ್ ಕಾಯಿಲೆ
- ಕಾಲು - ಬಾಯಿ ಜ್ವರ
- ಕೊಕ್ಕರೆ ರೋಗ
- ಕ್ಯಾಸನೂರ್ ಪಾರೆಸ್ಟ್ ಜ್ವರ (ಕೆಎಫ್ಡಿ)/ ಮಂಗನ ಖಾಯಿಲೆ
- ಕೋವಿಡ್-19
ರೇಬೀಸ್ ಅಥವಾ ಹುಚ್ಚುನಾಯಿ ರೋಗ
ಜಪಾನಿಸ್ ಎನ್ಸೆಪಲೈಟೀಸ್ (ಮೆದುಳು ಜ್ವರ)
ಬ್ಯಾಕ್ಟೀರಿಯಾ / ಸೂಕ್ಷ್ಮಾಣು ಜೀವಿಗಳಿಂದ ಹರಡುವ ರೋಗಗಳು
- ಕ್ಷಯರೋಗ / ಟ್ಯುಬರ್ಕ್ಯುಲೋಸಿಸ್
- ಕಂದುರೋಗ / ಬ್ರುಸೆಲ್ಲೋಸಿಸ್
- ಇಲಿಜ್ವರ / ಲೆಪ್ಟೋಸ್ಪೆöÊರೋಸಿಸ್
- ಕ್ಯಾಂಪೈಲೋಬ್ಯಾಕ್ಟೀರಿಯೋಸಿಸ್
- ಸಾಲ್ಮೋನೆಲ್ಲೋಸಿಸ್
- ನೆರಡಿರೋಗ / ಆಂಥ್ರಾಕ್ಸ್
- ಎರಿಸೆಪೆಲೋಸಿಸ್ / ಹಂದಿ ಕೆಂಪು ಚರ್ಮ ರೋಗ
- ಲಿಸ್ಟಿರಿಯೋಸಿಸ್
- ಸಿಟಕೋಸಿಸ್
- ಕ್ಯೂ - ಫೀವರ್
ಕಂದುರೋಗ / ಬ್ರುಸೆಲ್ಲೋಸಿಸ್
ನೆರಡಿರೋಗ / ಆಂಥ್ರಾಕ್ಸ್
ಜಂತುಹುಳು ಹಾಗೂ ಇತರೆ ಪರಾವಲಂಬಿ ಜೀವಿಗಳಿಂದ ಹರಡುವ ರೋಗಗಳು
- ಟಾಕ್ಸೋಕೇರಿಯಾಸಿಸ್ – ವಿಸರಲ್ ಲಾರ್ವಾ ಮೈಗ್ರಾನ್ಸ್
- ಕ್ಯುಟೇನಿಯಸ್ ಲಾರ್ವಾ ಮೈಗ್ರಾನ್ಸ್÷
- ಎಕೈನೋಕಾಕೋಸಿಸ್
- ಟೀನಿಯಾಸಿಸ್ ಅಥವಾ ಸಿಸ್ಟಿಸರ್ಕೋಸಿಸ್
- ಟ್ರೈಕಿನೆಲ್ಲೋಸಿಸ್
- ಫೇಸಿಯೋಲಾಸಿಸ್/ ಜಿಗಣಿಹುಳು ಭಾದೆ
- ಟಾಕ್ಸೋಪ್ಲಾಸ್ಮೋಸಿಸ್/ಬೆಕ್ಕಿನ ಖಾಯಿಲೆ
ಫಂಗಸ್ನಿಂದ ಹರಡುವ ರೋಗಗಳು
- ಡರ್ಮಟೋಫೈಟೋಸಿಸ್
- ಹಿಸ್ಟೋಪ್ಲಾಸ್ಮೋಸಿಸ್
- ಕ್ರಿಪ್ಟೋಕಾಕೋಸಿಸ್
- ಕಾಕ್ಸಿಡಿಯಾಡೋಮೈಕೋಸಿಸ್
ಪ್ರಾಣಿಜನ್ಯ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಬಗೆ
- ನಮ್ಮ ಸುತ್ತ ಮುತ್ತಲಿನ ಸ್ವಚ್ಚತೆ ಬಗ್ಗೆ ನಿಗಾವಹಿಸಿ ರೋಗ ಪ್ರಸಾರವನ್ನು ತಡೆಯಬೇಕು.
- ಲಸಿಕೆಗಳು ಲಭ್ಯವಿದ್ದಲ್ಲಿ ಮುಂಜಾಗ್ರತೆಯಾಗಿ ರೋಗ ನಿರೋಧಕ ಲಸಿಕೆ ಹಾಕಿಸಬೇಕು.
- ರೋಗ ವಾಹಕಗಳನ್ನು ನಿಯಂತ್ರಿಸಲು ಕಾಲಕಾಲಕ್ಕೆ ಕ್ರಿಮಿನಾಶಕ/ ಸೋಂಕು ನಿವಾರಕ ಔಷಧಿಗಳನ್ನು ಸಿಂಪಡಿಸಬೇಕು.
- ಪರೋಪಜೀವಿ (ಉದಾ: ಜಂತುಹುಳು, ಲಾಡಿಹುಳು ಮುಂತಾದವು) ನಿಯಂತ್ರಿಸಲು ಸೂಕ್ತ ಜಂತುನಾಶಕ ಔಷಧವನ್ನು ಕೊಡಬೇಕು.
- ಕಾಯಿಲೆಯಿಂದ ನರಳುತ್ತಿರುವ ಪ್ರಾಣಿ ಪಕ್ಷಿಗಳನ್ನು ಆರೋಗ್ಯವಂತ ಪ್ರಾಣಿ/ಪಕ್ಷಿಗಳಿಂದ ಬೇರ್ಪಡಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು.
- ಹೊಸದಾಗಿ ಖರೀದಿಸುವ ಪ್ರಾಣಿಗಳನ್ನು ಪಶುವೈದ್ಯರ ತಪಸಾಣೆಗೆ ಒಳಪಡಿಸಬೇಕು.
- ಯಾವುದೇ ಕಾರಣದಿಂದ ಸತ್ತ ಪ್ರಾಣಿಗಳ ಮಾಂಸ, ಚರ್ಮ ಹಾಗೂ ಕೂದಲುಗಳನ್ನು ನಾವು ಉಪಯೋಗಿಸಬಾರದು.
-
ಒಂದು ವೇಳೆ ರೋಗದಿಂದ ನರಳುವ ಪ್ರಾಣಿಗಳು ಕಚ್ಚಿದಲ್ಲಿ, ತಕ್ಷಣವೇ ಗಾಯವನ್ನು ಹರಿಯುವ ಶುದ್ಧ ನೀರಿನಿಂದ ತೊಳೆದು,
ಸಾಬೂನು ಹಾಗೂ ಕ್ರಿಮಿನಾಶಕದಿಂದ ಚೆನ್ನಾಗಿ ಶುಚಿಗೊಳಿಸಿ ವೈದ್ಯರ ಸಲಹೆ ಮೇರೆಗೆ ನಿಗದಿತ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳಬೇಕು.
-
ಮಳೆಗಾಲದಲ್ಲಿ ಅತಿ ಮುಖ್ಯವಾಗಿ ಬರಿಗಾಲಿನಲ್ಲಿ ನಡೆಯುವುದು ಹಾಗೂ ಕಲುಷಿತ ನೀರು ಕುಡಿಯುವುದು ಮಾಡಬಾರದು.
ಉದಾ: ಮಳೆಗಾಲದ ನಂತರ ಜಲಾವೃತಗೊಂಡ ವಾಸಸ್ಥಳಗಳಲ್ಲಿ, ನಿಂತ ನೀರು ಇಲಿಗಳ ಮಲ ಮೂತ್ರಗಳಿಂದ ಕಲುಷಿತಗೊಂಡು,
ಜನರು ಇಲಿ ಜ್ವರ ಸೋಂಕಿಗಿಡಾಗುವ ಸಾಧ್ಯತೆ ಹೆಚ್ಚು.
- ಕೊಟ್ಟಿಗೆಯಲ್ಲಿ ಬಿರುಕು ಇರದಂತೆ ನೋಡಿಕೊಳ್ಳುವುದರಿಂದ ರೋಗವಾಹಕಗಳನ್ನು ತಕ್ಕ ಮಟ್ಟಿಗೆ ತಡೆಗಟ್ಟಬಹುದು.
-
ಪ್ರಾಣಿ ಮೂಲ ಆಹಾರವನ್ನು ಚೆನ್ನಾಗಿ ಬೇಯಿಸಿ ಅಥವಾ ಕಾಯಿಸಿ ಸೇವಿಸಬೇಕು.
ಸೋಂಕಿರುವ ಮಾಂಸ, ಹಾಲು, ಮೊಟ್ಟೆ, ಇತ್ಯಾದಿ ಆಹಾರವನ್ನು ಸೇವಿಸಬಾರದು.
- ಹಣ್ಣು, ಹಂಪಲು ಮತ್ತು ತರಕಾರಿಗಳನ್ನು ಶುದ್ಧವಾದ ನೀರಿನಿಂದ ಚೆನ್ನಾಗಿ ತೊಳೆದ ನಂತರವೇ ಉಪಯೋಗಿಸಬೇಕು.